Sunday 6 April 2014

ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗಲಿ

ದೂರದ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಅತ್ಯಾಚಾರಗಳಂತಹ ಹೇಯ ಕೃತ್ಯ. ಇಂದು ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿ ನಡೆದಿದೆ. ಪಾರ್ಟಿ ಮುಗಿಸಿಕೊಂಡು ಮಧ್ಯರಾತ್ರಿ ಮನೆಯ ಬಳಿ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಮಾತನಾಡುತ್ತಿದ್ದ ಯವತಿಯೊಬ್ಬಳನ್ನು ಪೊಲೀಸರ ಸೋಗಿನಲ್ಲಿ ಬಂದ ದುಷ್ಟರ್ಮಿಗಳ ತಂಡ, ಆ ಯುವತಿಯನ್ನು ಕಾರಿನಲ್ಲಿ ಎತ್ತಿಹಾಕಿಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. 
ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಈ ಘಟನೆ ಉದ್ಯಾನನಗರಿಯಲ್ಲಿ ನಡೆದಿರುವುದು ನೋಡಿದರೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಸರ್ಕಾರ ಎಚ್ಚೆತ್ತಕೊಳ್ಲಬೇಕಿದೆ. ಈ ಘಟನೆ ಕುರಿತು ಹೇಳುವುದಾದರೆ ಮಹಿಳಾ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡುತ್ತಿರುವ ನಮ್ಮ ಸರ್ಕಾರಗಳು ಯಾವ ಕ್ರಮ ಕೈಗೊಳ್ಳುತ್ತಿವೆ. ಏನು ಮಾಡುತ್ತಿವೆ ಎಂಬ ಪ್ರಶ್ನೆ ಎದುರಾಗುತ್ತಿದೆ.
ರಾಜ್ಯದಲ್ಲಿ ಅತ್ಯಾಚಾರದ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸರ್ಕಾರ ಕೇವಲ ಕಾಗದದ ಹುಲಿಯಾದರೆ ಸಾಲದು. ಮಹಿಳಾ ರಕ್ಷಣೆಗೆ ಬದ್ಧ ಎಂದು ಹೇಳುವ ಸರ್ಕಾರ ಅದನ್ನು ಕಾರ್ಯಾರೂಪಕ್ಕೆ ತರಬೇಕು. ಆದರೆ ಅದು ಆಗುತ್ತಿಲ್ಲ. ಅತ್ಯಾಚಾರಕ್ಕೆ ಒಳಗಾದ ಆ ಯುವತಿ ಅಲ್ಲಿನ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.
 ತನ್ನ ಮೇಲೆ ಆಗಿರುವ ದೌರ್ಜ್ಯನ್ಯ ಮತ್ತು ಅತ್ಯಾಚಾರದಂತಹ ಕೃತ್ಯವನ್ನು ದೂರಿನಲ್ಲಿ ಸಾರಲೇಖವಾಗಿ ವಿವರಿಸಿದ್ದಾಳೆ. ಆದರೆ ಅಲ್ಲಿನ ಇನ್ಸ್‌ಪೇಕ್ಟರ್ ಮಹಾಶಯ ಅವರ ದೂರಿಗೆ ಅಷ್ಟೊಂದು ಮಹತ್ವವೇ ನೀಡಿಲ್ಲ. ಯುವತಿಯ ಮೇಲಿನ ನಡೆದಿರುವ ಸಾಮೂಹಿಕ ಅತ್ಯಾಚಾರ ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಮೇಲಧಿಕಾರಿಗಳು ಆ ಇನ್ಸ್‌ಪೇಕ್ಟರ್ ರಫೀಕ್ ಎನ್ನುವವರನ್ನು ಅಮಾನತ ಮಾಡಿದ್ದಾರೆ. ಆದರೆ ಇದು ತೋರಿಕೆಯ ಶಿಕ್ಷೆಯಲ್ಲದೆ ಮತ್ತೇನಲ್ಲ!
 ಒಬ್ಬ ಅಧಿಕಾರಿಯನ್ನು ಅಮಾನತು ಮಾಡಿದ ಕೂಡಲೇ ಅತ್ಯಾಚಾರದಂತಹ ಕುಕೃತ್ಯಗಳು ನಡೆಯುವುದೇ ಇಲ್ಲವೇ ಎಂಬ ಮಾತು ಬರುವುದು ಸಹಜ. ಆದರೆ ಇಲ್ಲಿ ಸರ್ಕಾರ ತನ್ನನ್ನು ತಾನು ರಕ್ಷಿಸಿಕೊಳ್ಳಲು ಈ ಕ್ರಮ ಕೈಗೊಂಡಿರುತ್ತದೆ ವಿನಹ ಮತ್ತೇನಲ್ಲ. ನಾಗರಿಕ ಸಮಾಜದ ಪ್ರತಿರೋಧ ಎದುರಿಸಲಾಗದ ಸರ್ಕಾರ, ಈಗಾಗಲೇ ಘಟನೆ ಕುರಿತು ಕರ್ತವ್ಯ ಲೋಪ ಎಸಗಿದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಹೇಳಿಕೊಳ್ಳಲು ಅಮಾನತು ಶಿಕ್ಷೆ ನೀಡಲಾಗಿದೆ. ಈ ಸಾಮೂಹಿಕ ಅತ್ಯಚಾರದಂತಹ ಪ್ರಕರಣಗಳು ದೇಶದ ಒಂದಿಲ್ಲೊಂದು ಭಾಗದಲ್ಲಿ ದಿನನಿತ್ಯ ನಡೆಯುತ್ತಲೇ ಇವೆ. ಇದಕ್ಕೆ ಕಾರಣ ಅಂತಹ ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡದೆ ಇರುವುದು. ನ್ಯಾಯಾಲಯ ನೀಡುವ ಶಿಕ್ಷೆ ಕೂಡ ಅಪರಾಧಿಗಳ ನಡುಕ ಹುಟ್ಟಿಸಬೇಕು. ಆದರೆ ನಮ್ಮ ನ್ಯಾಯಾಲಯಗಳಲ್ಲಿ ಪ್ರಕರಣಗಳು ಇತ್ಯರ್ಥವಾಗುವುದೇ ವಿಳಂಬವಾಗುತ್ತಿರುವುದರಿಂದ ಅಪರಾಧಿಗಳಿಗೆ ಭಯವಿಲ್ಲದಂತಾಗಿದೆ. 

No comments:

Post a Comment