Saturday 19 October 2013

ಸಂಪ್ರದಾಯ ಸಮರ್ಥಿಸಿಕೊಳ್ಳುತ್ತಿರುವ ಜಾತಿ ಜಂಗಮರು

ಭಾರತ ಆಧುನಿಕವಾಗಿ ಎಷ್ಟೇ ಮುಂದುವರಿದರೂ ಮೂಢನಂಬಿಕೆಗಳು ಮಾತ್ರ ಸಮಾಜದಿಂದ ದೂರವಾಗುತ್ತಿಲ್ಲ. ದೂರವಾಗುವುದು ಇಲ್ಲ ಎಂದು ತೋರುತ್ತಿದೆ. ಸಂಪ್ರದಾಯಗಳು ಕೂಡ ಹೊಸತನ ಮೇಳೈಸಿಕೊಂಡು ಮುಂದುವರಿಯುತ್ತಿವೆ. ಇಂತಹ ಆಚರಣಿಗಳಿಗೆ ನಮ್ಮ ಮಾಧ್ಯಮಗಳು ಪುಷ್ಟಿ ನೀಡುತ್ತಿವೆ. 
ಪ್ರಸ್ತುತ ಸಂದರ್ಭದಲ್ಲಿಯೂ ಕೂಡ ಸಂಪ್ರದಾಯಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಜಾತಿ ಜಂಗಮರು ಹೆಚ್ಚಾಗುತ್ತಿದ್ದಾರೆ ಇದರಿಂದಾಗಿ ಸನಾತನವಾದಿಗಳ ಕೈಮೇಲಾಗುತ್ತಿದೆ. ಇತ್ತೀಚೆಗೆ ರಾಜ್ಯದ ಗುಲಬರ್ಗಾ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿನಡೆದ ಅಡ್ಡಪಲ್ಲಕ್ಕಿ ಉತ್ಸವ ದಕ್ಕೆ ಜ್ವಲಂತ ಸಾಕ್ಷಿಯಾಗಿದೆ.
ಕಾಯಕಯೋಗಿ ಅಣ್ಣ ಬಸವಣ್ಣನವರ ಹೆಸರೇಳಿಕೊಂಡು ಮಾಡಬಾರದ ಆಚಾರಗಳನ್ನು ಮಾಡುತ್ತಾ ವೀರ ಶೈವ ಧರ್ಮಕ್ಕೆ ಕಳಂಕ ತರುತ್ತಿರುವುದು ವಿಷಾದನೀಯ. ವೈಚಾರಿಕತೆಯ ನೆಲೆಗಟ್ಟಿನಲ್ಲಿ ಭಕ್ತರನ್ನು ಸೃಷ್ಟಿ ಮಾಡಬೇಕಾದ ಮಠಾಧೀಶರು, ಅಂಧಕಾರದಲ್ಲಿಯೇ ಮುಂದುವರಿ ಯಲು ಪ್ರೋತ್ಸಾಹಿಸುತ್ತಿದ್ದಾರೆ. 
ಮಠಾಧೀಶರು ತಮ್ಮತನವನ್ನು ಮರೆತು ದಸರಾ ದರ್ಬಾರ್ ಹೆಸರಿನಲ್ಲಿ ವೈಭವಪೇತವಾಗಿ ಅಡ್ಡಪಲ್ಲಕ್ಕಿಯಲ್ಲಿ ಆಸೀನರಾಗುವ ಚಪಲ ಈ ಸನ್ಯಾಸಿಗಳಿಗೆ ಏಕೆಬೇಕು? ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ದಸರಾ ದರ್ಬಾರ್ ನಡೆಸುತ್ತಿರುವುದು ಸ್ಪಷ್ಟ ಕಾನೂನು ಉಲ್ಲಂಘನೆ ಎಂದು ಬೇರೆ ಹೇಳಬೇಕಾಗಿಲ್ಲ.?

ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕು ಇದೆ. ಆದರೆ ಹಕ್ಕನ್ನು ಉಪಯೋಗಿಸುವಕೊಳ್ಳುವ ಮಾರ್ಗ ಕೆಟ್ಟದ್ದಾಗಿದೆ. ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯಗಳು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಿರುವ ಮಠಾಧೀಶರ ಮಾತು ಒಪ್ಪಲು ಹೇಗೆ ಸಾಧ್ಯ.?