Sunday 27 January 2013

ಗಾಂಧಿ ಕೊಂದ ಗೋಡ್ಸೆ ಓದಿದ್ದು ಎಲ್ಲಿ...

ಮೈಸೂರು ಹುಲಿ ಟಿಪ್ಪು ಸುಲ್ತಾನ್ ವಿವಿಯನ್ನು ರಾಜ್ಯದಲ್ಲಿ ಸ್ಥಾಪನೆ ಮಾಡುವುದಾಗಿ ಕೇಂದ್ರ ಸಚಿವ ರಹೆಮಾನ್ ಖಾನ್ ಘೋಷಿಸುತ್ತಿದ್ದಂತೆ ಪರವಿರೋಧ ಚರ್ಚೆಗಳು ವ್ಯಾಪಕವಾಗಿ ನಡೆದಿವೆ. ರಾಜ್ಯದಲ್ಲಿ ಟಿಪ್ಪು ವಿವಿ ಸ್ಥಾಪಿಸಿದರೆ ಅದು ಉಗ್ರರ ತಾಣವಾಗುತ್ತದೆ ಎಂದೆಲ್ಲ ವ್ಯಾಖ್ಯಾನಿಸಲಾಗತ್ತಿದೆ. ವಿವಿ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.
ಈ ಸಂಘಟನೆಗಳು ಜಾತಿ ಮತ್ತು ಧರ್ಮಾಧಾರಿತ ವಿವಿಯನ್ನು ವಿರೋಧಿಸಲಿ ಆದರೆ ವಿವಿಗೆ ಟಿಪ್ಪು ಹೆಸರು ವಿರೋಧಿಸುವುದು ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ. ಇವರು ಕೊಡುವ ಕಾರಣಗಳು ನೋಡಿದರೆ ವೀರ ಸೇನಾನಿಗೆ ಅವಮಾನ ಮಾಡುತ್ತಿದ್ದಾರೆ. ಅದೇ ಟಿಪ್ಪು ಸುಲ್ತಾನ್ ಒಬ್ಬ ಹಿಂದೂವಾಗಿದ್ದರೆ ಅವನೊಬ್ಬ ಮಹಾನ್ ಸೇನಾನಿ ಎಂದು ಜಂಭ ಕೊಚ್ಚಿಕೊಂಡು ಅದೇ ಹೆಸರಿನಲ್ಲಿ ವಿವಿ ಸ್ಥಾಪನೆ ಮಾಡುವಂತೆ ಒತ್ತಾಯಿಸುತ್ತಿದ್ದರು ಎನ್ನುವುದರಲ್ಲಿ ಸಂಶಯವೇ ಬೇಡ ಎಂದೆನಿಸುತ್ತದೆ ಅಲ್ಲವೇ.
ಟಿಪ್ಪು ವಿವಿಯನ್ನು ವಿರೋಧಿಸುವ ಎಲ್ಲಾ ಹೋರಾಟಗಾರರು ಟಿಪ್ಪುವಿನ ನೈಜ ಇತಿಹಾಸ ಅರಿತವರಲ್ಲ. ಇತಿಹಾಸ ಎಂದರೆ ಚಿದಾನಂದ ಮೂರ್ತಿ, ಎಸ್.ಎಲ್. ಭೈರಪ್ಪ ಬರೆದ ಪುಸ್ತಕಗಳೆಂದೇ ಇವರು ಭಾವಿಸಿದಂತಿದೆ. ಅದಕ್ಕಾಗಿ ಟಿಪ್ಪುವಿನ ಹೆಸರನ್ನು ವಿರೋಧಿಸು ತ್ತಿದ್ದಾರೆ. ಟಿಪ್ಪು ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದವರು ಎನ್ನುವ ಒಂದೇ ಕಾರಣಕ್ಕಲ್ಲವೇ?
ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಅಂಬೇಡ್ಕರ್ ವಾಣಿಯಂತೆ ಪೂರ್ವಗ್ರಹ ಪೀಡಿತ ಮನಸ್ಸುಳ್ಳ ಸಂಶೋಧಕರು ಇತಿಹಾಸಕಾರರಾಗುವುದಿಲ್ಲ. ಅವರು ಸಂಶೋಧಕರಾಗಿಯೇ ಉಳಿಯುತ್ತಾರೆ.