Saturday 7 April 2012

ವಿವಾದದ ಸುಳಿಯಲ್ಲಿ ಭೀಮಾ ತೀರದ ಚಿತ್ರ

ಇಂತಹದ್ದೊಂದು ವಿವಾದ ಅನಗತ್ಯವಾಗಿತ್ತು. ಆದರೆ ಮನುಷ್ಯ ಎಂಬ ಜೀವಿಯ ತಹತಹಿಕೆಯೇ ಅಂತಹುದು. ಒಬ್ಬರು ಬೆಳೆಯುತ್ತಿರುವುದನ್ನು ಕಂಡರೆ ಕಣ್ಣು ಸೇರಿದಂತೆ ಎಲ್ಲೆಲ್ಲೋ ಉರಿ ಹತ್ತಿಕೊಳ್ಳುತ್ತೆ. ‘ಭೀಮಾ ತೀರದಲ್ಲಿ.. ಚಿತ್ರದ ಕುರಿತಾದ ವಿವಾದಕ್ಕೂ ಇಂತಹದ್ದೇ ಉರಿ ಕಾರಣ.
ಉತ್ತರ ಕರ್ನಾಟಕದ ಭಾಗದಲ್ಲಿ ಚಂದಪ್ಪ ಹರಿಜನ ಪ್ರಖ್ಯಾತಿ ಹಾಗೂ ಕುಖ್ಯಾತಿ ಎರಡನ್ನು ಹೊಂದಿರುವಾತ. ಆತನ ಜೀವನ ಗಾಥೆಯನ್ನೇ ಆಧರಿಸಿ ಓಂ ಪ್ರಕಾಶ್ ರಾವ್ ನಿರ್ದೇಶನದ ‘ಭೀಮಾ ತೀರದಲ್ಲಿ... ಚಿತ್ರ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಆದರೆ ಇದನ್ನು ಸಹಿಸದ ಕೆಲವು ಕುತ್ಸಿತ ಕ್ರಿಮಿಗಳು ಈ ಚಿತ್ರವನ್ನು ವಿವಾದಕ್ಕೆ ಎಡೆಮಾಡಿದ್ದಾರೆ.
ಜಾತಿ ಹಾಗೂ ವರ್ಗ ಸಂಘರ್ಷಗಳ ಕಾರಣದಿಂದಾಗಿ ಭೀಮಾ ತೀರದಲ್ಲಿ ನೂರಾರು ಹೆಣಗಳೇ ಉರುಳಿ ಹೋದವು ಅವುಗಳಲ್ಲಿ ಚಂದಪ್ಪ ಹರಿಜನ ಕೂಡಾ ಒಬ್ಬ. ಇವತ್ತಿಗೂ ಅಲ್ಲಿನ ಬಹುತೇಕರು ಚಂದಪ್ಪನನ್ನು ಹಂತಕ, ಸಮಾಜದ್ರೋಹಿ ಎಂದರೆ ಸಿಟ್ಟಿಗೆಳುತ್ತಾರೆ.