ಗೂಂಡಾ ವಕೀಲರಿಂದ ಮಾಧ್ಯಮ ಮಿತ್ರರಿಗೆ ಥಳಿತ |
ವಕೀಳರ ಕೀಳತನ ಪ್ರದರ್ಶಿಸಿದ್ದು ಇದೆ ಮೊದಲೇನಲ್ಲ.
೨೦೦೯ರಲ್ಲಿ ಭೂಕಬಳಿಕೆ ಪ್ರಕರಣದ ಆರೋಪ ಎದುರಿಸುತ್ತಿದ್ದ ನ್ಯಾ. ಪಿ.ಡಿ ದಿನಕರನ್ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಸಬಾರದು ಎಂದು ವಕೀಲರ ಗುಂಪುಗಳ ನಡೆವೆಯೇ ಮಾರಾಮಾರಿ ನಡೆದು ನ್ಯಾ ಗೋಪಾಲಗೌಡ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಅವಾಗಲೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಸಂಚಾರಿ ನಿಯಮ ಉಲಂಘನೆ ವಿಷಯಕ್ಕೆ ಸಂಬಂ ಧಿಸಿದಂತೆ ವಕೀಲರು ಮತ್ತು ಸಂಚಾರಿ ಪೊಲೀಸರ ನಡುವೆ ಪ್ರತಿನಿತ್ಯ ಒಂದಿಲ್ಲೊಂದು ಘಟನೆ ನಡೆಯುತ್ತಲೇ ಇರುತ್ತವೆ ಆದರೂ ಕಾನೂನು ಎಂದರೆ ಏನು ಎಂಬುದು ನಿಮ್ಮಿಂದ ಕಲಿಯಬೇಕಾಗಿಲ್ಲ ಎಂಬ ಪುಂಡ ಪ್ರವೃತ್ತಿ. ಎರಡು ತಿಂಗಳ ಹಿಂದೆ ಸಂಚಾರಿ ನಿಯಮ ಉಲಂಘಿಸಿದ ವಕೀಲರ ವಾಹನಕ್ಕೆ ಸಂಚಾರಿ ಪೊಲೀಸರು ಕ್ಯಾಪ್ ಹಾಕಿದ್ದರಿಂದ ಸಿಟ್ಟಾದ ವಕೀಲ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದ ಇವೆಲ್ಲ ಸಣ್ಣ ಪುಟ್ಟ ಘಟನೆಗಳಿಂದ ಬಚಾವಾದ ವಕೀಲರು ದೊಡ್ಡ ತಪ್ಪುಗಳಿಗೆ ಕೈಹಾಕಿದ್ದಾರೆ. ಮೊದಲ ಗಲಭೆಯನ್ನು ಆಕಸ್ಮಿಕ ಎಂದು ಪರಿಗಣಿಸಿದ್ದ ಸರ್ಕಾರದ ಮೃದು ಧೊರಣೆಯೇ ಈ ಘಟನೆಗೆ ಕಾರಣ ಎಂದು ಬಿಡಿಸಿ ಹೇಳ ಬೇಕಾಗಿಲ್ಲ ಸರ್ಕಾರದ ಈ ಮೃದು ಧೋರಣಿ ಪೊಲೀಸ್ ವ್ಯವಸ್ಥೆಯ ಕೈಕಟ್ಟಿ ಹಾಕಿತು. ಇದರಿಂದ ಉತ್ತೇಜಿತರಾದ ಪುಂಡ ವಕೀಲರು ರೌದ್ರಾವತಾರ ತಾಳಿದರು. ಮಾಧ್ಯಮ ಮತ್ತು ಪೊಲೀಸರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದರು. ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿದ್ದ ಸರ್ಕಾದ ಕ್ರಮ ಸರಿಯೇ? ತನ್ನನ್ನೇ ಪದೇ ಪದೇ ಟೀಕಿಸುತ್ತಿದ್ದ ಮಾಧ್ಯಮದವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಒಳಗೊಳಗೆ ಮುಗಳ್ನಗೆ ಬೀರಿತು. ಇಷ್ಟೆಲ್ಲ ನಡೆದರೂ ಮುಖ್ಯಮಂತ್ರಿ ಸೇರಿದಂತೆ ಯಾವುದೇ ಹೇಳಿಕೆ ನೀಡಲಿಲ್ಲ ಗುಂಡಾವರ್ತನೆ ತೋರಿದವರನ್ನು ಬಂಧಿಸಬೇಕಾದ ಸರ್ಕಾರ ತನಿಖೆ ಎಂಬ ಅಸ್ತ್ರ ಪ್ರಯೋಗಿಸುವ ಮೂಲಕ ಕಣ್ಣೋರೆಸುವ ತಂತ್ರ ಅನುಸರಿಸಿದೆ.
ನ್ಯಾಯಾಂಗ ತನಿಖೆಯಿಂದ ಸತ್ಯ ಹೊರಬರಲಿದೆಯೇ?
ಇಡೀ ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ ಇದಕ್ಕೆ ಮುಖ್ಯಸ್ಥರನ್ನಾಗಿ ನಿವೃತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಈ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತದೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ. ಸರ್ಕಾರ ತನಿಖೆ ಎಂಬ ಅಸ್ತ್ರ ಪ್ರಯೋಗಿಸಿದರೆ ಸಾಲದು ನಿಜಾಂಶ ಹೊರಗೆ ಬರಬೇಕಾದರೆ ಸಿಬಿಐ ತನಿಖೆಯಾಗಬೇಕು. ಆ ತನಿಖೆಗೆ ಸರ್ಕಾರ ಒಪ್ಪಿಸಿದರೆ ಮಾತ್ರ ಘಟನೆಯಲ್ಲಿ ಹಲ್ಲೆಗೊಳಗಾದವರಿಗೆ ನ್ಯಾಯ ಸಿಗುತ್ತದೆ ಮತ್ತು ಪುಂಡ ವಕೀಲರು ಎಷ್ಟೇ ಪುಂಡರಾಗಿದ್ದರು ಕಾನೂನಿನಡಿಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ತನಿಖೆ ಮಾಡುವ ಮೊದಲು ಇದ್ದ ಆಧಾರಗಳನ್ನು ಪರಿಗಣಿಸಿ ಗೂಂಡಾ ವಕೀಲರನ್ನು ಬಂಧಿಸಬೇಕು ಸಮಾಜದಲ್ಲಿ ಯಾರೇ ಆಗಲಿ ವಿಶೇಷವಾಗಿ ಕರಿ ಕೋಟು ತೊಟ್ಟವರು ಮತ್ತು ಕಾನೂನನ್ನು ಪಾಲಿಸಬೇಕಾದವರು ಮುರಿದರೆ ಅವರಿಗೆ ಎಲ್ಲರಿಗಿಂತಲೂ ಹೆಚ್ಚಿನ ಶಿಕ್ಷೆಯಾಗಬೇಕು ನ್ಯಾಯ ನಿರ್ಣಯಿಸಬೇಕಾದ ವಕ್ತಾರರು ಕಾನೂನನ್ನು ಕೈಗೆತ್ತಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ರಕ್ತ ದೋಕುಳಿಯೇ ಉದಾಹರಣೆ.
ಪೂರ್ವ ನಿಯೋಜಿತ ಸಂಚು: ಈ ವಕೀಲರಿಂದ ನಿರೀಕ್ಷಿಸಲಾಗದ ಕೇಲವು ಘಟನೆಗಳನ್ನು ನೋಡಿದರೆ ಇದು ಪೂರ್ವ ನಿಯೋಜನಾ ಕೃತ್ಯ ಎಂಬ ಸಂಶಯ ಬರದೆ ಇರದು ಮಾಡಿದ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಕಾನೂನು ಎಂಬ ಅಸ್ತ್ರ ಬಳಸಿ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶವನ್ನು ಈ ಕ್ರಿಮಿನಲ್ ಲಾಯರ್ಗಳು ತಮಗೆ ತೋಚಿದ ರೀತಿಯಲ್ಲಿ ಬಳಸಿಕೊಂಡು ಇಡೀ ಪೊಲೀಸ್ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದು, ಇಷ್ಟೆಲ್ಲಾ ಸಂಚು ರೂಪಿಸಿ ಕಾಯುತ್ತ ಕುಳಿತಿದ್ದ ಪುಂಡ ವಕೀಲರ ಗುಂಪಿನ ಬಗ್ಗೆ ಗುಪ್ತಚರ ಸಂಸ್ಥೆಗೆ ಮಾಹಿತಿ ಇರಲಿಲ್ಲವೇ ಇದ್ದರು ವಿಫಲವಾಗಲೂ ಬಲವಾದ ಕಾರಣವೇನಾದರೂ ಇದೆಯೇ ಎಂಬುದಕ್ಕೆ ಸೂಕ್ತ ತನಿಖೆಯಿಂದ ಮಾತ್ರ ಹೊರ ಬರಬೇಕಿದೆ.
ಪೂರ್ವ ನಿಯೋಜಿತ ಸಂಚು: ಈ ವಕೀಲರಿಂದ ನಿರೀಕ್ಷಿಸಲಾಗದ ಕೇಲವು ಘಟನೆಗಳನ್ನು ನೋಡಿದರೆ ಇದು ಪೂರ್ವ ನಿಯೋಜನಾ ಕೃತ್ಯ ಎಂಬ ಸಂಶಯ ಬರದೆ ಇರದು ಮಾಡಿದ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಕಾನೂನು ಎಂಬ ಅಸ್ತ್ರ ಬಳಸಿ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶವನ್ನು ಈ ಕ್ರಿಮಿನಲ್ ಲಾಯರ್ಗಳು ತಮಗೆ ತೋಚಿದ ರೀತಿಯಲ್ಲಿ ಬಳಸಿಕೊಂಡು ಇಡೀ ಪೊಲೀಸ್ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದು, ಇಷ್ಟೆಲ್ಲಾ ಸಂಚು ರೂಪಿಸಿ ಕಾಯುತ್ತ ಕುಳಿತಿದ್ದ ಪುಂಡ ವಕೀಲರ ಗುಂಪಿನ ಬಗ್ಗೆ ಗುಪ್ತಚರ ಸಂಸ್ಥೆಗೆ ಮಾಹಿತಿ ಇರಲಿಲ್ಲವೇ ಇದ್ದರು ವಿಫಲವಾಗಲೂ ಬಲವಾದ ಕಾರಣವೇನಾದರೂ ಇದೆಯೇ ಎಂಬುದಕ್ಕೆ ಸೂಕ್ತ ತನಿಖೆಯಿಂದ ಮಾತ್ರ ಹೊರ ಬರಬೇಕಿದೆ.