ಪ್ರಜಾಪ್ರಭುತ್ವದಲ್ಲಿ ಸಂವಿಧಾನಕ್ಕೆ ತನ್ನದೆಯಾದ ಮಹತ್ವವಿದೆ ಅದರ ಆಶಯಗಳಲ್ಲಿ ನಡೆಯಬೇಕಾಗಿದ್ದು ಪ್ರತಿಯೋಬ್ಬರ ಕರ್ತವ್ಯ ಅದರಲ್ಲಿಯೂ ಜವಬ್ದಾರಿಯುತ ಸ್ಥಾನದಲ್ಲಿದ್ದವರು ಅದಕ್ಕೆ ಧಕ್ಕೆಯಾಗದಂತೆ ಹೇಳಿಕೆ ನೀಡಬೇಕಾದುದ್ದು ಅವರ ಗುರುತರ ಹೊಣೆ. ಜವಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್ ಯಡಿಯೂರಪ್ಪ ನೀಡಿದ ಹೇಳಿಕೆ ನೋಡಿದರೆ ಹಾಸ್ಯಾಸ್ಪದವಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳ ಮುಖವಾಡ ಕಳಚಲು ಹೋಗಿ ತನ್ನ ಮಾನವನ್ನೆ ಹರಾಜು ಹಾಕಿಕೊಂಡಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಅಪಮಾನ ಮಾಡಿದ್ದಾರೆ.
ವೈಯಕ್ತಿಕ ದ್ವೇಷವನ್ನು ಸಾರ್ವಜನಿಕಗೊಳಿಸಿ ಪ್ರಜಾಸತ್ತಾತ್ಮಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಲು ಕಾರಣವಾಗಿದ್ದಾರೆ ತನ್ನ ಮೇಲೆ ಇರುವ ಹಗರಣಗಳಿಂದ ಮುಕ್ತನಾಗಲು ಹೋಗಿ ತಾನೇ ಮೋಕ್ಷ ಪಡೆದುಕೊಂಡಿದ್ದಾರೆ. ಈ ಯಡಿಯೂರಪ್ಪನ ಹಣೆಬರಹ, ಕುಮಾರಸ್ವಾಮಿಯವರ ಮೇಲೆ ಆರೋಪ ಸಾಭೀತು ಮಾಡಲು ಧರ್ಮಸ್ಥಳದ ಮಂಜುನಾಥನನ್ನು ಬಳಸಿಕೊಂಡು ದೇವರ ಹೆಸರಿನಲ್ಲಿ ಆಣೆ ಮಾಡಲು ಸವಾಲು ನೀಡಿದ್ದಾರೆ ಎಂದರೆ ಇವರ ದ್ವೇಷ ಎಷ್ಟಿದೆ ಎಂಬುವುದು ಅರ್ಥವಾಗುತ್ತದೆ. ಸಂವಿಧಾನ ಪ್ರಜಾಪ್ರಭುತ್ವ ಎಂಬ ಹೆಸರುಗಳು ಆಣೆ ಪ್ರಮಾಣದ ಮುಂದೆ ಗೌಣವಾಗಿ ಹೋಗಿವೆ. ಯಡಿಯೂರಪ್ಪನವರು ಮಠ ಮಂದಿರಗಳಿಗೆ ಹಣ ನೀಡುವುದರ ಮೂಲಕ ಧಾರ್ಮಿಕ ನಾಯಕರನ್ನು ತನ್ನ ಬೆಂಬಲಕ್ಕೆ ನಿಲ್ಲುವಂತೆ ಮಾಡಿ ಯಶಸ್ವಿಯಾಗಿದ್ದ ಮುಖ್ಯಮಂತ್ರಿ ಅದೇ ಜೋಶ್ನಲ್ಲಿ ಮಂಜುನಾಥನನ್ನು ಒಲಿಸಿಕೊಳ್ಳಲು ಸುಳ್ಳನ್ನು ಸತ್ಯವಾಗಿ ತೊರಿಸಲು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಂತಿದೆ ಆದರೆ...
ವೈಯಕ್ತಿಕ ಹಿತಾಸಕ್ತಿಗೆ ಧಾರ್ಮಿಕ ಕ್ಷೇತ್ರವೊಂದನ್ನು ಬಳಸಿಕೊಳ್ಳುವುದರ ಮೂಲಕ ತಮ್ಮ ಪಾಪದ ಕೊಡ ಮಂಜುನಾಥನ ಮೇಲೆ ಹಾಕಲು ರೆಡಿಯಾದರೂ ನಾಡಿನ ಪ್ರಗತಿಪರರು ವಿಚಾರವಂತರು ಮಠಾಧೀಶರು ವಿರೋಧದಿಂದಾಗಿ ಯಡಿಯೂರಪ್ಪ ಧರ್ಮ ಸಂಕಟ ಅನುಭವಿಸುವಂತಾಯಿತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಅಭಿವೃದ್ಧಿಗಿಂತ ಹಗರಣದಲ್ಲಿಯೇ ಹೆಸರು ಮಾಡಿದ ಮುಖ್ಯಮಂತ್ರಿಯೆಂದರೆ ಯಡಿಯೂರಪ್ಪ ಒಂದು ಸರ್ಕಾರ ನಡೆಯುವುದು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಅಲ್ಲ ಸಂವಿಧಾನದ ಅಡಿಯಲ್ಲಿ ಇದು ಯಡಿಯೂರಪ್ಪನವರಿಗೂ ಗೊತ್ತು ಆದರೆ ಏನು ಮಾಡುವುದು ಎಲ್ಲವೂ ವಿಧಿಯಾಟ.
ರಾಜಕೀಯಕ್ಕೆ ದೇವರುಗಳು ಬೇಕಾ?
ಪ್ರಜಾಸತ್ತಾತ್ಮಕ ಸರ್ಕಾರದಲ್ಲಿ ಪ್ರಜೆಗಳಿಗೆ ತನ್ನದೆಯಾದ ಮಹತ್ವವಿದೆ ಅವರ ಹಿತಾಸಕ್ತಿಯೇ ಆಡಳಿತ ಪಕ್ಷದ ಹೊಣೆಯಾಗಿರುತ್ತದೆ ಇದು ಅವರ ಕರ್ತವ್ಯ ಕೂಡ ಹೌದು. ಆದರೆ ಆರೋಪ ಪ್ರತ್ಯಾರೋಪ ವಿಷಯ ಬಂದಾಗ ಇಡೀ ಮತದಾರರನ್ನು ಮರೆತು ವೈಯಕ್ತಿಕ ಪ್ರತಿಷ್ಠೆಗಾಗಿ ವೇದಿಕೆಯನ್ನು ಸಿದ್ಧಪಡಿಸಿಕೊಂಡು ತಾವು ಮಾಡಿದ ಕರ್ಮವನ್ನು ದೇವರ ಮೇಲೆ ಹಾಕಿ ಬಿಡುವುದು ಎಷ್ಟರ ಮಟ್ಟಿಗೆ ಸರಿ.
ತಮ್ಮ ಆರೋಪ ಹಗರಣವನ್ನು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗವಾಗಿ ಚರ್ಚಿಸಬೇಕು ಹಗರಣಗಳಿಗೆ ಸಂಬಂಧಿಸಿದಂತೆ ದಾಖಲೆ ನೀಡಬೇಕು ಅದು ಬಿಟ್ಟು ವಿನಾ ಕಾರಣ ವೈಯಕ್ತಿಕ ದ್ವೇಷಕ್ಕಾಗಿ ಧಾರ್ಮಿಕ ಸ್ಥಳವೊಂದರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮತ್ತು ಅದರ ಮೇಲೆ ಆಣೆ ಪ್ರಮಾಣ ಸಾಭೀತು ಮಾಡಲು ಹೊರಟಿರುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ.
ಆಣೆ ಮಾಡಬೇಕಾಗಿರುವುದು ದೇವರ ಮುಂದಲ್ಲ ೬ಕೋಟಿ ಕನ್ನಡಿಗರ ಮುಂದೆ
ಪ್ರಜಾಪ್ರಭುತ್ವ ಎಂದರೆ ಜನರಿಂದ ಜನರಿಗಾಗಿ ಜನರೆ ನಡೆಸುವ ಸರ್ಕಾರ ಆದರೆ ಅದನ್ನು ಮರೆತ ರಾಜಕೀಯ ನಾಯಕರು ದೇವರುಗಳನ್ನು ರಾಜಕೀಯದಲ್ಲಿ ವೈಭವಿಕರಿಸಲು ಹೊರಟಿದ್ದಾರೆ. ಹಾಲಿ ಮಾಜಿಗಳು ಪ್ರಮಾಣ ಮಾಡಬೇಕಾಗಿರುವುದು ಕಲ್ಲು ದೇವರ ಮುಂದೆ ಅಲ್ಲ ಜೀವಂತ ದೇವರುಗಳಾದ ೬ ಕೋಟಿ ಕನ್ನಡಿಗರ ಮುಂದೆ ಅವರು ನಿಮ್ಮ ಆಣೆ ಪ್ರಮಾಣಕ್ಕೆ ನಿರ್ಣಾಯಕ ಉತ್ತರ ಕೊಡುವ ಸಾಕ್ಷಾತ್ ದೇವರು. ಧಾರ್ಮಿಕ ಸ್ಥಳವೊಂದರಲ್ಲಿ ಪ್ರಮಾಣ ಮಾಡುವುದಾದರೆ ಮಂಜುನಾಥನ ಸನ್ನಿಧಿಯಲ್ಲಿ ಕುದಿಸಿದ ಎಣ್ಣೆಯಲ್ಲಿ ಕೈ ಎದ್ದಲಿ ನಿಮ್ಮ ಆಣೆ ಪ್ರಮಾಣ ನೈಜತೆ ಆತ್ಮ ಸಾಕ್ಷಿಗೊಂದು ಮೈಲಿಗಲ್ಲು ಇದನ್ನು ಕರ್ನಾಟಕದ ಸಮಸ್ತ ಜನತೆ ಸ್ವಾಗತಿಸುತ್ತದೆ. ಹಾಲಿ ಮಾಜಿ ಮುಖ್ಯಮಂತ್ರಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಪರಸ್ಪರ ಕೆಸರೆರಚಾಟದಲ್ಲಿ ತಲ್ಲಿನರಾಗಿ ಧರ್ಮಸ್ಥಳದಲ್ಲಿ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡುವ ಮಟ್ಟಕ್ಕಿಳಿದಿರುವುದು ಪಾರದರ್ಶಕ ರಾಜಕೀಯಕ್ಕೆ ಅಪಚಾರವಾಗಿದೆ.
ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ನೀಡಿದ ಹೇಳಿಕೆ ಕನ್ನಡಿಗ ಮತದಾರರಿಗೆ ಮಾಡಿದ ಘೋರ ಅಪಮಾನವಾಗಿದೆ. ಈ ಪ್ರಮಾಣಕ್ಕೆ ಉಡುಪಿಯ ಪೇಜಾವರ ಸ್ವಾಮೀಜಿಗಳು ನೀಡಿರುವ ಹೇಳಿಕೆ ಗಮನಿಸಿದಾಗ ಆಣೆ ಬೇಡ ಆತ್ಮ ವಿಮರ್ಶೆ ಬೇಕು ಎಂಬುದು ಉತ್ತಮ ಸಲಹೆಯಾದರೂ ಇದನ್ನು ಎಷ್ಟರ ಮಟ್ಟಿಗೆ ಅಪ್ಪಿಕೊಂಡಾರು ಎನ್ನುವ ಪ್ರಶ್ನೆ ಕಾಡದೆ ಇರದು ಆತ್ಮ ಸಾಕ್ಷಿ ಇದ್ದವರಿಗೆ ಪೇಜಾವರ ಸ್ವಾಮೀಜಿಗಳ ಮಾತು ಅನ್ವಯಿಸುತ್ತದೆ. ಆದರೆ ಆತ್ಮ ವಿಮರ್ಶೆ ಎಂಬ ಪದವೇ ಗೊತ್ತಿರದ ಅಪ್ರಬುದ್ಧ ನಾಯಕರಿಗೆ ಬೋಧನೆ ಮಾಡಲು ಹೊರಟಂತಿದೆ. ಆತ್ಮ ವಿಮರ್ಶೆಯ ವಿಚಾರ ಬಂದಾಗ ಪೇಜಾವರ ಸ್ವಾಮೀಜಿಗಳ ಬಗ್ಗೆ ಸಂಶಯ ಕಾಡದೆ ಇರದು ಮಠಕ್ಕೆ ದಲಿತರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಬೇಕು ಎಂಬ ಪ್ರಸ್ತಾಪ ಮುಂದಿಟ್ಟಾಗ ಇವರ ಆತ್ಮ ವಿಮರ್ಶೆ ಎಲ್ಲಿ ಹೊಗಿತ್ತು. ಮುಖ್ಯಮಂತ್ರಿಯ ಅಧಿಕಾರ ಉಳಿಸುವುದಕ್ಕಾಗಿ ವೀರಶೈವ ಮಠಾಧೀಶರು ನಿರ್ಣಯ ಕೈಗೊಳ್ಳಲು ಮುಂದೆ ಬರುವ ಮಠಾಧೀಶರು ಯಡಿಯೂರಪ್ಪನವರ ತಪ್ಪನ್ನು ತಿದ್ದಿಕೊಳ್ಳುವಂತೆ ಏಕೆ ಸಲಹೆ ನೀಡಬಾರದು ಬಸವ ತತ್ವವೇ ನಮ್ಮ ಮೂಲ ಮಂತ್ರ ಎಂದು ಜಂಭ ಕೊಚ್ಚಿಕೊಳ್ಳುವ ಮಠಾಧೀಪತಿಗಳು ಆಣೆ ಮಾಡುವುದು ಯಾರ ತತ್ವ. ಆಣೆ ಮಾಡಿದ ಮಾತ್ರಕ್ಕೆ ಮೇಲಿರುವ ಆರೋಪಗಳು ಮುಕ್ತಿಯಾಗುತ್ತವೆಯೇ ರಾಜಕೀಯದಲ್ಲಿ ಆಣೆ ಪ್ರಮಾಣ ಎಷ್ಟರ ಮಟ್ಟಿಗೆ ನಿಜವಾಗುತ್ತವೆ ರಾಜಕೀಯ ಎಂಬುವುದೇ ಸುಳ್ಳರ ವಾಸಸ್ಥಾನ ಇಲ್ಲಿ ನಿಜ ಹೇಳಿದರು ನಂಬುವವರು ಯಾರು. ಹಾಗಂತ ಎಲ್ಲಾ ರಾಜಕೀಯ ನಾಯಕರು ಸುಳ್ಳರಂತಲ್ಲ ಏನೇ ಇರಲಿ. ಆಣೆ ಪ್ರಮಾಣದ ಸವಾಲನ್ನು ಮಾಜಿ ಮುಖ್ಯಮಂತ್ರಿಗಳು ಸ್ವಲ್ಪ ಸಮಧಾನ ಚಿತ್ತದಿಂದ ಯೋಚಿಸಬೇಕಾಗಿತ್ತೇನೋ ಸಂವಿಧಾನದ ಚೌಕಟ್ಟಿನಲ್ಲಿ ಮುಖ್ಯಮಂತ್ರಿಗಳ ಸವಾಲನ್ನು ಸ್ವೀಕರಿಸಲು ಸಿದ್ಧನೆಂದು ಹೇಳಿದರೆ ಕುಮಾರಸ್ವಾಮಿಯವರ ಘನತೆ ಹೆಚ್ಚುತ್ತಿತ್ತು ಆದರೆ ಆಸ್ತಿಕರು ಒಪ್ಪಬೇಕಲ್ಲ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾದ ಮತ್ತು ಜನರ ಭಾವನೆಗಳಿಗೆ ಧಕ್ಕೆ ತರುವಂತ ಹೇಳಿಕೆ ನೀಡಿದ ಮತ್ತು ಸ್ವೀಕರಿಸಿದ ಇಬ್ಬರು ಕನ್ನಡಿಗ ಮತದಾರರ ಕ್ಷೇಮೆ ಯಾಚಿಸಬೇಕು.
ವೈಯಕ್ತಿಕ ದ್ವೇಷವನ್ನು ಸಾರ್ವಜನಿಕಗೊಳಿಸಿ ಪ್ರಜಾಸತ್ತಾತ್ಮಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಲು ಕಾರಣವಾಗಿದ್ದಾರೆ ತನ್ನ ಮೇಲೆ ಇರುವ ಹಗರಣಗಳಿಂದ ಮುಕ್ತನಾಗಲು ಹೋಗಿ ತಾನೇ ಮೋಕ್ಷ ಪಡೆದುಕೊಂಡಿದ್ದಾರೆ. ಈ ಯಡಿಯೂರಪ್ಪನ ಹಣೆಬರಹ, ಕುಮಾರಸ್ವಾಮಿಯವರ ಮೇಲೆ ಆರೋಪ ಸಾಭೀತು ಮಾಡಲು ಧರ್ಮಸ್ಥಳದ ಮಂಜುನಾಥನನ್ನು ಬಳಸಿಕೊಂಡು ದೇವರ ಹೆಸರಿನಲ್ಲಿ ಆಣೆ ಮಾಡಲು ಸವಾಲು ನೀಡಿದ್ದಾರೆ ಎಂದರೆ ಇವರ ದ್ವೇಷ ಎಷ್ಟಿದೆ ಎಂಬುವುದು ಅರ್ಥವಾಗುತ್ತದೆ. ಸಂವಿಧಾನ ಪ್ರಜಾಪ್ರಭುತ್ವ ಎಂಬ ಹೆಸರುಗಳು ಆಣೆ ಪ್ರಮಾಣದ ಮುಂದೆ ಗೌಣವಾಗಿ ಹೋಗಿವೆ. ಯಡಿಯೂರಪ್ಪನವರು ಮಠ ಮಂದಿರಗಳಿಗೆ ಹಣ ನೀಡುವುದರ ಮೂಲಕ ಧಾರ್ಮಿಕ ನಾಯಕರನ್ನು ತನ್ನ ಬೆಂಬಲಕ್ಕೆ ನಿಲ್ಲುವಂತೆ ಮಾಡಿ ಯಶಸ್ವಿಯಾಗಿದ್ದ ಮುಖ್ಯಮಂತ್ರಿ ಅದೇ ಜೋಶ್ನಲ್ಲಿ ಮಂಜುನಾಥನನ್ನು ಒಲಿಸಿಕೊಳ್ಳಲು ಸುಳ್ಳನ್ನು ಸತ್ಯವಾಗಿ ತೊರಿಸಲು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಂತಿದೆ ಆದರೆ...
ವೈಯಕ್ತಿಕ ಹಿತಾಸಕ್ತಿಗೆ ಧಾರ್ಮಿಕ ಕ್ಷೇತ್ರವೊಂದನ್ನು ಬಳಸಿಕೊಳ್ಳುವುದರ ಮೂಲಕ ತಮ್ಮ ಪಾಪದ ಕೊಡ ಮಂಜುನಾಥನ ಮೇಲೆ ಹಾಕಲು ರೆಡಿಯಾದರೂ ನಾಡಿನ ಪ್ರಗತಿಪರರು ವಿಚಾರವಂತರು ಮಠಾಧೀಶರು ವಿರೋಧದಿಂದಾಗಿ ಯಡಿಯೂರಪ್ಪ ಧರ್ಮ ಸಂಕಟ ಅನುಭವಿಸುವಂತಾಯಿತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಅಭಿವೃದ್ಧಿಗಿಂತ ಹಗರಣದಲ್ಲಿಯೇ ಹೆಸರು ಮಾಡಿದ ಮುಖ್ಯಮಂತ್ರಿಯೆಂದರೆ ಯಡಿಯೂರಪ್ಪ ಒಂದು ಸರ್ಕಾರ ನಡೆಯುವುದು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಅಲ್ಲ ಸಂವಿಧಾನದ ಅಡಿಯಲ್ಲಿ ಇದು ಯಡಿಯೂರಪ್ಪನವರಿಗೂ ಗೊತ್ತು ಆದರೆ ಏನು ಮಾಡುವುದು ಎಲ್ಲವೂ ವಿಧಿಯಾಟ.
ರಾಜಕೀಯಕ್ಕೆ ದೇವರುಗಳು ಬೇಕಾ?
ಪ್ರಜಾಸತ್ತಾತ್ಮಕ ಸರ್ಕಾರದಲ್ಲಿ ಪ್ರಜೆಗಳಿಗೆ ತನ್ನದೆಯಾದ ಮಹತ್ವವಿದೆ ಅವರ ಹಿತಾಸಕ್ತಿಯೇ ಆಡಳಿತ ಪಕ್ಷದ ಹೊಣೆಯಾಗಿರುತ್ತದೆ ಇದು ಅವರ ಕರ್ತವ್ಯ ಕೂಡ ಹೌದು. ಆದರೆ ಆರೋಪ ಪ್ರತ್ಯಾರೋಪ ವಿಷಯ ಬಂದಾಗ ಇಡೀ ಮತದಾರರನ್ನು ಮರೆತು ವೈಯಕ್ತಿಕ ಪ್ರತಿಷ್ಠೆಗಾಗಿ ವೇದಿಕೆಯನ್ನು ಸಿದ್ಧಪಡಿಸಿಕೊಂಡು ತಾವು ಮಾಡಿದ ಕರ್ಮವನ್ನು ದೇವರ ಮೇಲೆ ಹಾಕಿ ಬಿಡುವುದು ಎಷ್ಟರ ಮಟ್ಟಿಗೆ ಸರಿ.
ತಮ್ಮ ಆರೋಪ ಹಗರಣವನ್ನು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗವಾಗಿ ಚರ್ಚಿಸಬೇಕು ಹಗರಣಗಳಿಗೆ ಸಂಬಂಧಿಸಿದಂತೆ ದಾಖಲೆ ನೀಡಬೇಕು ಅದು ಬಿಟ್ಟು ವಿನಾ ಕಾರಣ ವೈಯಕ್ತಿಕ ದ್ವೇಷಕ್ಕಾಗಿ ಧಾರ್ಮಿಕ ಸ್ಥಳವೊಂದರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮತ್ತು ಅದರ ಮೇಲೆ ಆಣೆ ಪ್ರಮಾಣ ಸಾಭೀತು ಮಾಡಲು ಹೊರಟಿರುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ.
ಆಣೆ ಮಾಡಬೇಕಾಗಿರುವುದು ದೇವರ ಮುಂದಲ್ಲ ೬ಕೋಟಿ ಕನ್ನಡಿಗರ ಮುಂದೆ
ಪ್ರಜಾಪ್ರಭುತ್ವ ಎಂದರೆ ಜನರಿಂದ ಜನರಿಗಾಗಿ ಜನರೆ ನಡೆಸುವ ಸರ್ಕಾರ ಆದರೆ ಅದನ್ನು ಮರೆತ ರಾಜಕೀಯ ನಾಯಕರು ದೇವರುಗಳನ್ನು ರಾಜಕೀಯದಲ್ಲಿ ವೈಭವಿಕರಿಸಲು ಹೊರಟಿದ್ದಾರೆ. ಹಾಲಿ ಮಾಜಿಗಳು ಪ್ರಮಾಣ ಮಾಡಬೇಕಾಗಿರುವುದು ಕಲ್ಲು ದೇವರ ಮುಂದೆ ಅಲ್ಲ ಜೀವಂತ ದೇವರುಗಳಾದ ೬ ಕೋಟಿ ಕನ್ನಡಿಗರ ಮುಂದೆ ಅವರು ನಿಮ್ಮ ಆಣೆ ಪ್ರಮಾಣಕ್ಕೆ ನಿರ್ಣಾಯಕ ಉತ್ತರ ಕೊಡುವ ಸಾಕ್ಷಾತ್ ದೇವರು. ಧಾರ್ಮಿಕ ಸ್ಥಳವೊಂದರಲ್ಲಿ ಪ್ರಮಾಣ ಮಾಡುವುದಾದರೆ ಮಂಜುನಾಥನ ಸನ್ನಿಧಿಯಲ್ಲಿ ಕುದಿಸಿದ ಎಣ್ಣೆಯಲ್ಲಿ ಕೈ ಎದ್ದಲಿ ನಿಮ್ಮ ಆಣೆ ಪ್ರಮಾಣ ನೈಜತೆ ಆತ್ಮ ಸಾಕ್ಷಿಗೊಂದು ಮೈಲಿಗಲ್ಲು ಇದನ್ನು ಕರ್ನಾಟಕದ ಸಮಸ್ತ ಜನತೆ ಸ್ವಾಗತಿಸುತ್ತದೆ. ಹಾಲಿ ಮಾಜಿ ಮುಖ್ಯಮಂತ್ರಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಪರಸ್ಪರ ಕೆಸರೆರಚಾಟದಲ್ಲಿ ತಲ್ಲಿನರಾಗಿ ಧರ್ಮಸ್ಥಳದಲ್ಲಿ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡುವ ಮಟ್ಟಕ್ಕಿಳಿದಿರುವುದು ಪಾರದರ್ಶಕ ರಾಜಕೀಯಕ್ಕೆ ಅಪಚಾರವಾಗಿದೆ.
ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ನೀಡಿದ ಹೇಳಿಕೆ ಕನ್ನಡಿಗ ಮತದಾರರಿಗೆ ಮಾಡಿದ ಘೋರ ಅಪಮಾನವಾಗಿದೆ. ಈ ಪ್ರಮಾಣಕ್ಕೆ ಉಡುಪಿಯ ಪೇಜಾವರ ಸ್ವಾಮೀಜಿಗಳು ನೀಡಿರುವ ಹೇಳಿಕೆ ಗಮನಿಸಿದಾಗ ಆಣೆ ಬೇಡ ಆತ್ಮ ವಿಮರ್ಶೆ ಬೇಕು ಎಂಬುದು ಉತ್ತಮ ಸಲಹೆಯಾದರೂ ಇದನ್ನು ಎಷ್ಟರ ಮಟ್ಟಿಗೆ ಅಪ್ಪಿಕೊಂಡಾರು ಎನ್ನುವ ಪ್ರಶ್ನೆ ಕಾಡದೆ ಇರದು ಆತ್ಮ ಸಾಕ್ಷಿ ಇದ್ದವರಿಗೆ ಪೇಜಾವರ ಸ್ವಾಮೀಜಿಗಳ ಮಾತು ಅನ್ವಯಿಸುತ್ತದೆ. ಆದರೆ ಆತ್ಮ ವಿಮರ್ಶೆ ಎಂಬ ಪದವೇ ಗೊತ್ತಿರದ ಅಪ್ರಬುದ್ಧ ನಾಯಕರಿಗೆ ಬೋಧನೆ ಮಾಡಲು ಹೊರಟಂತಿದೆ. ಆತ್ಮ ವಿಮರ್ಶೆಯ ವಿಚಾರ ಬಂದಾಗ ಪೇಜಾವರ ಸ್ವಾಮೀಜಿಗಳ ಬಗ್ಗೆ ಸಂಶಯ ಕಾಡದೆ ಇರದು ಮಠಕ್ಕೆ ದಲಿತರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಬೇಕು ಎಂಬ ಪ್ರಸ್ತಾಪ ಮುಂದಿಟ್ಟಾಗ ಇವರ ಆತ್ಮ ವಿಮರ್ಶೆ ಎಲ್ಲಿ ಹೊಗಿತ್ತು. ಮುಖ್ಯಮಂತ್ರಿಯ ಅಧಿಕಾರ ಉಳಿಸುವುದಕ್ಕಾಗಿ ವೀರಶೈವ ಮಠಾಧೀಶರು ನಿರ್ಣಯ ಕೈಗೊಳ್ಳಲು ಮುಂದೆ ಬರುವ ಮಠಾಧೀಶರು ಯಡಿಯೂರಪ್ಪನವರ ತಪ್ಪನ್ನು ತಿದ್ದಿಕೊಳ್ಳುವಂತೆ ಏಕೆ ಸಲಹೆ ನೀಡಬಾರದು ಬಸವ ತತ್ವವೇ ನಮ್ಮ ಮೂಲ ಮಂತ್ರ ಎಂದು ಜಂಭ ಕೊಚ್ಚಿಕೊಳ್ಳುವ ಮಠಾಧೀಪತಿಗಳು ಆಣೆ ಮಾಡುವುದು ಯಾರ ತತ್ವ. ಆಣೆ ಮಾಡಿದ ಮಾತ್ರಕ್ಕೆ ಮೇಲಿರುವ ಆರೋಪಗಳು ಮುಕ್ತಿಯಾಗುತ್ತವೆಯೇ ರಾಜಕೀಯದಲ್ಲಿ ಆಣೆ ಪ್ರಮಾಣ ಎಷ್ಟರ ಮಟ್ಟಿಗೆ ನಿಜವಾಗುತ್ತವೆ ರಾಜಕೀಯ ಎಂಬುವುದೇ ಸುಳ್ಳರ ವಾಸಸ್ಥಾನ ಇಲ್ಲಿ ನಿಜ ಹೇಳಿದರು ನಂಬುವವರು ಯಾರು. ಹಾಗಂತ ಎಲ್ಲಾ ರಾಜಕೀಯ ನಾಯಕರು ಸುಳ್ಳರಂತಲ್ಲ ಏನೇ ಇರಲಿ. ಆಣೆ ಪ್ರಮಾಣದ ಸವಾಲನ್ನು ಮಾಜಿ ಮುಖ್ಯಮಂತ್ರಿಗಳು ಸ್ವಲ್ಪ ಸಮಧಾನ ಚಿತ್ತದಿಂದ ಯೋಚಿಸಬೇಕಾಗಿತ್ತೇನೋ ಸಂವಿಧಾನದ ಚೌಕಟ್ಟಿನಲ್ಲಿ ಮುಖ್ಯಮಂತ್ರಿಗಳ ಸವಾಲನ್ನು ಸ್ವೀಕರಿಸಲು ಸಿದ್ಧನೆಂದು ಹೇಳಿದರೆ ಕುಮಾರಸ್ವಾಮಿಯವರ ಘನತೆ ಹೆಚ್ಚುತ್ತಿತ್ತು ಆದರೆ ಆಸ್ತಿಕರು ಒಪ್ಪಬೇಕಲ್ಲ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾದ ಮತ್ತು ಜನರ ಭಾವನೆಗಳಿಗೆ ಧಕ್ಕೆ ತರುವಂತ ಹೇಳಿಕೆ ನೀಡಿದ ಮತ್ತು ಸ್ವೀಕರಿಸಿದ ಇಬ್ಬರು ಕನ್ನಡಿಗ ಮತದಾರರ ಕ್ಷೇಮೆ ಯಾಚಿಸಬೇಕು.