Friday 20 February 2015

ಕಾಂಗ್ರೆಸ್ ದಲಿತರ ಹಿತೈಷಿಯಾಗುವುದು ಯಾವಾಗ?

ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೇಳಿಬರುತ್ತಿದ್ದ ಕೂಗು ಬಹಿರಂಗ ವೇದಿಕೆಗೆ ಬಂದಿದೆ. ಇದರಿಂದಾಗಿ ಕಾಂಗ್ರೆಸ್ನಲ್ಲಿ ಮತ್ತೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ದಲಿತರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ವಾದಕ್ಕೆ ದಲಿತ ಸಂಘಟನೆಗಳು ಬಹಿರಂಗವಾಗಿಯೇ ಅಖಾಡಕ್ಕಿದಿವೆ.
ಖರ್ಗೆ ಸೇರಿದಂತೆ ದಲಿತರಲ್ಲಿ ಯಾರಾದರೊಬ್ಬರು ಮುಖ್ಯಮಂತ್ರಿ ಆಗಲಿ ಎಂದು ೨೦ಕ್ಕೂ ಹೆಚ್ಚು ದಲಿತಪರ ಸಂಘಟನೆಗಳು ಸಭೆ ಸೇರುವ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ಸೆಡ್ಡು ಹೊಡೆದಿವೆ.
ಎಲ್ಲ ಸಂಘಟನೆಗಳು ಒಂದೇ ವೇದಿಕೆಯಡಿ ಬಂದಿರುವುದು ಸ್ವಾಗತಾರ್ಹ ವಿಷಯವಾದರೂ ಕೆಲಸ ಎಂದೋ ಆಗ ಬೇಕಾಗಿತ್ತು. ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದಾರೆ ಎನ್ನುವುದೇ ಸಮಾಧಾನದ ಸಂಗತಿ.
೨೦೦೪ ಮತ್ತು ೨೦೦೮ರ ಚುನಾವಣೆಯ ವೇಳೆ ದಲಿತ ನಾಯಕರ ಪರ ಸಂಘಟಿತರಾಗಿ ಧ್ವನಿ ಎತ್ತಿದ್ದರೆ ಎಂದೋ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಿದ್ದರು. ಆದರೆ ದಲಿತಪರ ಸಂಘಟನೆಗಳೇ ರಾಜಕೀಯ ನಾಯಕರ ಚೇಲಾಗಳಾಗಿದ್ದವು. ಅವರು ಕೊಡುವ ಎಂಜಲಿಗೆ ವಿನಮ್ರರಾಗಿ ಮನೆ ಬಾಗಿಲು ಬಡಿದರು. ಇದರಿಂದ ಸಂಘಟನೆಯ ಮಹತ್ವ ನಾಯಕರ ಬದ್ಧತೆ ಎಷ್ಟು ಎಂಬುದು ಅವರಿಗೆ ಅರ್ಥವಾಗಿ ಹೋಗಿತ್ತು. ಸಂಘಟಿತರಾಗಲು ಸಜ್ಜಾದರೆ ವಿಂಗಡಣೆಗೆ ಸೂತ್ರ ರೂಪಿಸುವ ರಾಜಕಾರಣಿಗಳ ಮುಂದೆ ಸಂಘಟನೆಗಳ ಸಂಘರ್ಷ ಕೆಲಸ ಮಾಡಲಿಲ್ಲ. ಸಂಘಟನೆಗಳನ್ನು ಹೇಗೆ ಬೇಕೋ ಹಾಗೇ ಬಳಸಿಕೊಂಡರು. ದಲಿತ ಸಿಎಂ ಅಂದಾಗ ಮಾತ್ರ ಕುತಂತ್ರದಿಂದ ಸಮುದಾಯಕ್ಕೆ ಸಿಗಬೇಕಾದ ಅವಕಾಶ ತಪ್ಪಿಸಿದರು.