Sunday, 17 April 2011

ಗಾಳಿ ಬಿಟ್ಟಾಗ ತೂರಿಕೋ...

ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಾದರೆ ರಾಜ್ಯದ ಮತದಾರರ ಆಶೀರ್ವಾದವೇನು ಆಗಿರಲಿಲ್ಲ ಕಾಂಗ್ರೆಸ್ಸ್ ಮತ್ತು ಜೆಡಿಎಸ್ ಎಂಬ ಭಟ್ಟಂಗಿಗಳ ಸ್ವಾರ್ಥರಾಜಕಾರಣ ಬಿಜೆಪಿಯನ್ನು ಅಧಿಕಾರದ ಅಂಗಳಕ್ಕೆ ತಂದು ನಿಲ್ಲಿಸಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಚನಭ್ರಷ್ಟತೆ ಆರು ದಶಕಗಳ ಕಾಲ ರಾಜಕೀಯ ಮಾಡಿದ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಗೆ ಬೆಸತ್ತ ಜನತೆ ಹೊಸಬರಿಗೆ ಅವಕಾಶ ನೀಡಿದರೆ ಅಭಿವೃದ್ಧಿ ಕೆಲಸಗಳು ಆದಾವು ಎಂಬ ಮುಂದಾಲೋಚನೆಯಿಂದ ಪ್ರಬುದ್ಧ ಮತದಾರರು ಬಿಜೆಪಿಯನ್ನು ಬೆಂಬಲಿಸಿದರು ಎನ್ನುವುದು ಸರ್ವವಿಧಿತ. ಬಿಜೆಪಿ ಆಡಳಿತದ ಚುಕ್ಕಾಣೆ ಹಿಡಿಯಬೇಕೆಂಬ ಹಂಬಲದಿಂದ ಆಡುತ್ತಿದ್ದ ಮಾತುಗಳು, ಕೋಡುತ್ತಿದ್ದ ಭರವಸೆಗಳು, ಜಾತ್ಯಾತೀತ ಸಮಾವೇಶಗಳು, ವಿಭಾಗವಾರು ಸಮಾವೇಶಗಳಲ್ಲಿ ಬಿಡುತ್ತಿದ್ದ ರೀಲುಗಳು, ಇವೆಲ್ಲವುಗಳಿಗೆ ಮಾರುಹೋದ ಮತದಾರರು ರಾಮರಾಜ್ಯದ ಕನಸುಗಳಿಗೆ ಹಂಬಲಿಸಿದ್ದ ಈ ಕನಸುಗಳ ಲೋಕದಲ್ಲಿ ತೇಲಾಡುತ್ತಿದ್ದ ಮತಭಾಂದವರು ಕೇವಲ ಆರು ತಿಂಗಳಲ್ಲಿಯೆ ತನ್ನ ತಪ್ಪಿನ ಅರಿವಾಗಿ ಭ್ರಮನಿರಸನಗೊಂಡ. ನಾಡಿನ ಮತದಾರರ ತೀರ್ಪಿನಂತೆ ಬಿಜೆಪಿ ಸರಕಾರ ಅಧಿಕಾರದ ಗದ್ದುಗೆ ಹಿಡಿಯಿತು ಚುನಾವಣೆಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೆರಿಸುವ ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಯಿತು. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸರಕಾರ ಅವರ ಸಮಸ್ಯೆಗಳಿಗೆ ಮಾನವೀಯ ದೃಷ್ಟಿಯಿಂದ ಸ್ಪಂದಿಸದೆ ಹಾವೇರಿಯಲ್ಲಿ ಗೋಲಿಬಾರ್ ಮಾಡಲಾಯಿತು. ಇದು ಬಿಜೆಪಿ ಸರ್ಕಾರ ರೈತರಿಗೆ ಕೋಡಮಾಡಿದ ಮೊದಲ ವಿಶಿಷ್ಟ ಕೋಡುಗೆಯಾದರೆ ಇನ್ನೊಂದಡೆ ಫಲವತ್ತಾದ ಕೃಷಿ ಭೂಮಿಯನ್ನು ಅಭಿವೃದ್ಧಿ ಎಂಬ ಅಸ್ತ್ರಕ್ಕೆ ಬಳಸಿಕೊಳ್ಳುತ್ತ ರೈತನ್ನು ಬೀದಿ ಪಾಲು ಹೊರಟಿತು. ಇವು ಹಿಂದೆ ಆಡಳಿತ ನಡೆಸಿದ ಸರಕಾರಗಳು ಮಾಡಿರದ ಸಾಧನೆಯನ್ನು ಕೇವಲ ಎರಡು ವರ್ಷಗಳ ಅವಧಿಯಲ್ಲಿ ಮಾಡಿ ತೋರಿಸಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗಳು. ಎರಡು ವರ್ಷಗಳಲ್ಲಿ ಸಾಧಿಸಲು ಹೇಗೆ ಸಾಧ್ಯವಾಯಿತು ಅಂತಹ ಸಾಧನೆಗಳಾದರೂ ಏನು? ಕೇವಲ ಮಾಧ್ಯಮಗಳಲ್ಲಿ ಜಾಹಿರಾತು, ಬೀದಿ ನಾಟಕಗಳಲ್ಲಿ ಫ್ಲೆಕ್ಸ್ ಕಟೌಟ್‌ಗಳಲ್ಲಿ ರಾರಾಜಿಸಿದ್ದು ಸಾಧನೆಯೇ? ಅಥವಾ ಸರ್ಕಾರ ಹಾಕಿಕೊಂಡ ಯೋಜನೆಗಳನ್ನು ಬಿಂಬಿಸುವುದೇ ಸರ್ಕಾರದ ಸಾಧನೆಯೇ? ಕಾರ್ಯಗತ ಮಾಡಿದ ಯೋಜನೆಗಳು ಎಷ್ಟರ ಮಟ್ಟಿಗೆ ಜನರಿಗೆ ಉಪಯೋಗವಾಗಿವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೌಲಭ್ಯಗಳು ಧಕ್ಕಿವೇಯೇ? ಎನ್ನುವುದು ಮುಖ್ಯವೇ ಹೊರತು ಹಾಕೊಕೊಂಡ ಯೋಜನೆಗಳಲ್ಲ ಜಾಹಿರಾತಲ್ಲ ಬೀದಿ ನಾಟಕವಲ್ಲ.
ಹಾಗಂತ ಸರ್ಕಾರ ಹಾಕಿಕೊಂಡ ಎಲ್ಲ ಯೋಜನೆಗಳು ಅಪ್ರಯೋಜನ ಎಂದು ಹೇಳಲು ಸಾಧ್ಯವಿಲ್ಲ. ಹಲವು ಯೋಜನೆಗಳು ಜನರ ಮನದಲ್ಲಿ ಅಚ್ಚಳಿಯದೆ ಉಳಿದಿವೆ ಭಾಗ್ಯಲಕ್ಷೀ ಯೋಜನೆ, ಸಂಧ್ಯಾಸುರಕ್ಷೆ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ ಯೋಜನೆ, ತುರ್ತು ಚಿಕಿತ್ಸೆಗಾಗಿ ಒದಗಿಸಿದ ೧೦೮ರ ಸೇವೆ ಜನರಿಗೆ ಮಹದುಪಕಾರ. ಇವೆಲ್ಲವುಗಳ ಹೊರತಾಗಿ ವಿಚಾರ ಮಾಡಿದಾಗ ಹಿಂದಿನ ಸರ್ಕಾರಗಳಿಗಿಂತ ವಿಭಿನ್ನ ಆಡಳಿತದ ಪರಿಕಲ್ಪನೆ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಈ ಸರ್ಕಾರ, ನಾಡಿನಲ್ಲಿ ಹಿಂದೆಂದೂ ಕಂಡು ಕೇಳದಷ್ಟು ಅವ್ಯವಹಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆಯುತ್ತಿದೆ. ಭ್ರಷ್ಟಚಾರ, ಸ್ವಜನಪಕ್ಷಪಾತತೆ ಮೀತಿಮೀರಿದೆ. ಸ್ವತ ಮುಖ್ಯಮಂತ್ರಿಗಳೆ ನಾನಾ ಹಗರಣಗಳಲ್ಲಿ ಸಿಲಿಕಿಕೊಂಡಿದ್ದಾರೆ ಸರ್ಕಾರದಲ್ಲಿ ಕಳ್ಳರು, ಸುಳ್ಳರು, ಬ್ಯಾಂಕ್ ವಂಚಕರು, ಭೂಗಳ್ಳರು, ಅತ್ಯಾಚಾರಿಗಳು, ಲಂಚಕೋರರು, ಕಳ್ಳಸಾಗಣೆದಾರರು ತುಂಬಿ ತುಳುಕುತಿದ್ದಾರೆ ಇವರೇನಾ? ವಿಭಿನ್ನ ಸರ್ಕಾರದ ಮಂತ್ರಿ ಮಹೋದಯರು ಇಂಥಹ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಕೆಲವು ಡೊಂಗಿ  ಮಠಾಧಿಶರು ತಮ್ಮ ಕೈಚಳಕ ತೊರಿಸುತಿದ್ದದ್ದು ಒಂದು ಕಡೆಯಾದರೆ ಸರ್ಕಾರದಿಂದ ಉದಾರ ಅನುದಾನ ಪಡೆದು ರಾಜಕೀಯ ಮಿಶ್ರಿತ ಧಾರ್ಮಿಕ ನಾಯಕರಾಗಿ ಫೊಸು ಕೊಡುತ್ತಿದ್ದಾರೆ. ಇವರ ಹಗರಣಗಳ ಬಗ್ಗೆ ಮಾಧ್ಯಮ ಹೊರ ಹಾಕಿದಾಗ ಅವರ ಮೇಲೆ ಹಲವು ಪ್ರಕರಣಗಳು ದಾಖಲಿಸುವಲ್ಲಿಯೂ ಹಿಂದೆ ಬಿದ್ದಿಲ್ಲ ಮಾಧ್ಯಮ ಹಿಂದೆಂದಿಗಿಂತಲೂ ಹೆಚ್ಚು ಚುರುಕಾಗಿ ಕೆಲಸ ಮಾಡುತ್ತಿದೆಯಾದರೂ ಸತ್ಯ ವರದಿಯನ್ನು ಪ್ರಕಟಿಸಿದಾಗ ಅದರಲ್ಲಿ ಸಿಲುಕಿದ ವ್ಯಕ್ತಿ ಮಾಧ್ಯಮದವರು ತಿರುಚಿ ಬರೆದಿದ್ದಾರೆ ಎಂದು ನುಣೆಚಿಕೊಳ್ಳುತ್ತಿದ್ದಾನೆಯೆ ಹೊರತು ಗುಂಡುರಾಯರಂತೆ ಪತ್ರಕರ್ತರನ್ನು ಅರಬ್ಬಿ ಸಮುದ್ರಕ್ಕೆ ಏಸೆಯಿರಿ ಎಂದು ಹೇಳದೆ ಇರುವುದೇ ಪತ್ರಕರ್ತರಿಗಿರುವ ದೊಡ್ಡ ಸಂತೋಷ. ಪಾಪ ಯಡಿಯೂರಪ್ಪ ಹೋರಾಟದ ಮೂಲಕ ರಾಜ್ಯದ ಆಡಳಿತ ಚುಕ್ಕಾಣೆ ಹಿಡಿದು ಹಗರಣಗಳ ಮೂಲಕ ಜನಪ್ರೀಯತೆ ಗಳಿಸಿದರವರು. ಸರ್ಕಾರವನ್ನು ಗಟ್ಟಿಗೋಳಿಸಲು ಹೋಗಿ ಹಲವರ ಕಂಗೆಣ್ಣೆಗೆ ಗುರಿಯಾಗಿ ಭಂಡಾಯದ ಬೀಸಿಯನ್ನು ಎದುರಿಸಿ ಅಸ್ಥಿರತೆಯಲ್ಲಿಯೆ ಕಾಲ ಕಳೆದು ಅಭಿವೃದ್ಧಿಯೇ ಆಡಳಿತದ ಮಂತ್ರ ಎಂದು ಜಪ ಮಾಡಿದ ಮುಖ್ಯಮಂತ್ರಿ ಸುಮಾರು ಶಾಸಕರನ್ನು ಖರಿದಿಸಿ ಉಪಚುನಾಣೆಗೆ ಕಾರಣರಾಗಿ ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತಂದುದ್ದಲ್ಲದೆ ಅಂಥಹ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ನೈತಿಕತೆಯನ್ನೆ ಮರೆತರು. ದಂಡನಾಯಕನೆ ಹೀಗಿರುವಾಗ ಸಂಪುಟದ ಸಚಿವರು ಹೇಗಿರಬಹುದು. ಇಂತಹ ಹಗರಣಗಳು ಈಗ ಸಕರಾತ್ಮಕವಾಗಿ ಕಂಡರು ಮುಂದಾಗುವ ಅತಂತ್ರ ಸ್ಥಿತಿಗೆ ಸರ್ಕಾರವೇ ಭವಿಷ್ಯವನ್ನು ಬರೆದುಕೊಳ್ಳುತ್ತಿದೆ. ಅಧಿಕಾರದಿಂದ ಎಲ್ಲ ಹಗರಣಗಳನ್ನು ಮುಚ್ಚಿ ಹಾಕಬಹುದು ಎಂಬ ಅವರ ಭ್ರಮೆ  ಅವರಿಗೆ ಮುಳುವಾಗದೆ ಇರದು. ಶಿಸ್ತಿನ ಪಕ್ಷ ಎಂದು ಹೆಳಿಕೊಳ್ಳುತ್ತಿದ್ದ ನಾಯಕರ ಧ್ವನಿ ಕ್ಷೀಣಿಸಿದೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದು ಕೇವಲ ಹಗರಣಗಳ ಮೂಲಕವೇ ಜನಪ್ರೀಯವಾದ ಪಕ್ಷ ಎಂದರೆ ಬಿಜೆಪಿಯಾಗಿದೆ.

No comments: